ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ

ಶ್ಯಾಮ ಕೊನೆಗೂ ನನ್ನ ಮನೆಗೆ ಬಂದ
ನನ್ನೆಲ್ಲ ಕೊರಗಿಗೂ ಕೊನೆಯ ತಂದ.

ಹರಿಯ ತಲೆಮೇಲಿತ್ತು ನವಿಲಿನ ಕಿರೀಟ
ಹೊಳೆವ ಪೀತಾಂಬರ ಮೈಯ ಮೇಲೆ,
ಕಾಂತಿ ಚಿಮ್ಮುವ ಕರ್ಣಕುಂಡಲ ಕಿವಿಯಲ್ಲಿ
ಕಸ್ತೂರಿ ತಿಲಕ ಹಣೆಯ ಮೇಲೆ

ರಾಧೆ ನಾ ನಾಚಿದೆ ಕರಗಿ ನೀರಾದೆ
ನಲ್ಲ ತಾನೇ ಬಂದ ನನ್ನ ಮನೆಗೆ
ಕನಕಾಂಬರೀ ಬಣ್ಣ ಪತ್ತಲವ ಉಟ್ಟೆ
ಕಪ್ಪು ರವಿಕೆಯ ತೊಟ್ಟು ಬಂದೆ ಹೊರಗೆ

ಆಹ ಎಂಥ ಚೆಲುವ ಕೃಷ್ಣ ಗಿರಿಧರನು
ಎಂಥ ಮೋಹನನೇ ಯಶೋದೆ ಮಗನು
ಇಂಥ ನಲ್ಲ ನನಗೆ ಹೇಗೆ ದೊರಕಿದನೇ
ಬೇರೆ ಯಾರೇ ಇವನ ಸಮನಿರುವನು

ಬಾಚಿದ ಕಣ್ಣಲ್ಲೆ ಚಾಚಿ ತನ್ನಧರವ
ನಾಚುತ್ತಿದ್ದ ನನ್ನ ಸೆಳೆದೆ ಬಿಟ್ಟ
ತೋಚಲಿಲ್ಲ ಏನೂ, ದಿಗ್ಭ್ರಾಂತಿ ಸಂಭ್ರಮ
ಆಚೀಚೆ ಜನ ನೋಡಿ ಏನಂದರೋ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚುಳ್ಳಿ ಬೆಳಕಿಂಡಿ – ೭
Next post ಲಿಂಗಮ್ಮನ ವಚನಗಳು – ೧೦೧

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys